ಸ್ವಾಮಿ ಕ್ರಿಯಾನಂದ (ಜೇಮ್ಸ್ ಡೊನಾಲ್ಡ್ ವಾಲ್ಟರ್ಸ್) ಇವರು ಪರಮಹಂಸ ಯೋಗಾನಂದರ ನೇರ ಶಿಷ್ಯ ಹಾಗೂ ಆನಂದ ಸಂಸ್ಥೆಯ ಸಂಸ್ಥಾಪಕ. ಯೋಗಾನಂದರು ತಮ್ಮ ಜೀವಿತಾವಧಿಯಲ್ಲಿ ಇವರಿಗೆ ತಮ್ಮ 'ಸೆಲ್ಫ್ ರಿಯಲೈಸೇಶನ್ ಫೆಲಾಶಿಪ್'ನ ಆಡಳಿತ ಮಂಡಳಿಗೆ ಸೇರಿಸಿಕೊಂಡರು. ಕ್ರಿಯಾನಂದರಿಗೆ ತಮ್ಮ ಕ್ರಿಯಾಯೋಗದ ದೀಕ್ಷೆಯನ್ನು ಕೊಡಲು ಅನುಮತಿಸಿದ್ದರು. ಯೋಗಾನಂದರ ಕಾಲಾನಂತರ ಇವರು ಸನ್ಯಾಸ ದೀಕ್ಷೆಯನ್ನು 1955ರಲ್ಲಿ ಎಸ್.ಆರ್.ಎಫ್.ನ ಆಗಿನ ಅಧ್ಯಕ್ಷೆ ಶ್ರೀ ಶ್ರೀ ದಯಾಮಾತ ಅವರಿಂದ ಪಡೆದು ಕ್ರಿಯಾನಂದ ಎಂಬ ಹೆಸರನ್ನು ಪಡೆದರು.ಇವರು ಆಂಗ್ಲಭಾಷೆಯನ್ನು ಹೊರತು ಪಡಿಸಿ ಭಾರತೀಯ ಭಾಷೆಗಳಾದ ಹಿಂದಿ,ಬಂಗಾಲಿಯನ್ನೂ ಬಲ್ಲವರಾಗಿದ್ದರು. 2009ರಲ್ಲಿ ಇವರು ನಯಾಸ್ವಾಮಿ ಎಂಬ ಹೊಸ ಸ್ವಾಮಿ ಪಂಥವನ್ನು ಪ್ರಾರಂಭಿಸಿದರು.